ಚಂದನವನದಲ್ಲಿ ಚಿತ್ರವು ಜನರಿಗೆ ತಲುಪಬೇಕಾದರೆ ಪ್ರಚಾರ ಮುಖ್ಯವಾಗಿದೆ. ಅದಕ್ಕೆಂದೆ ನಿರ್ಮಾಪಕರು,ನಿರ್ದೇಶಕರು ತಮ್ಮ ಚಿತ್ರವನ್ನು ಬಿಡುಗಡೆ ಮುಂಚೆ ಎಲ್ಲರಿಗೂ ಗೊತ್ತಾಗುವಂತೆ ಸಾಕಷ್ಟು ಶ್ರಮ ವಹಿಸುತ್ತಾರೆ. ಮಿ.ಪ್ರೇಮಿ ಎನ್ನುವ ಚಿತ್ರವು ಸಿದ್ದಗೊಂಡು ಹಲವು ತಿಂಗಳುಗಳು ಕಳೆದಿವೆ. ಈಗ ಬಿಡುಗಡೆ ಸಮೀಪ ಬರುತ್ತಿರುವುದರಿಂದ ಗಾಂಧಿನಗರದಲ್ಲಿ ಕುಳ್ಳಶಾಂತ ಎನಿಸಿಕೊಂಡಿರುವ ಇವರು ಪತ್ನಿ ಹೆಸರಿನಲ್ಲಿ ಪುತ್ರ ಕುಶಾಲ್ಗೋಸ್ಕರ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಭಾನುವಾರ ಅಣ್ಣಮ್ಮ ದೇವಸ್ಥಾನದಲ್ಲಿ ತಂಡದೊಂದಿಗೆ ದೇವಿಗೆ ಪೂಜೆ ಮಾಡಿಸಿ ಚಿತ್ರವು ಯಶಸ್ವಿಯಾಗಲೆಂದು ಪ್ರಾರ್ಥನೆ ಮಾಡಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ವಿನೂತನ ರೀತಿಯಲ್ಲಿ ಪ್ರಚಾರ ಕೈಗೊಳ್ಳಲು ಕರ್ನಾಟಕ ರಾಜ್ಯದಂತ ೧೦ ಟ್ಯಾಂಕರ್ ವಾಹನಗಳಲ್ಲಿ ಮಿ.ಪ್ರೇಮಿ ಟ್ರೈಲರ್, ಪೋಸ್ಟರ್, ಸ್ಟಾರ್ ಕಲಾವಿದರು ಮಾತನಾಡಿರುವ ಬಗ್ಗೆ ತುಣುಕುಗಳನ್ನು ತೋರಿಸಲಾಗುವುದು.
ಪ್ರಚಾರದ ವಾಹನಕ್ಕೆ ಚಾಲನೆ ನೀಡಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾಗೋವಿಂದು ಗೆಳಯ ಶಾಂತರಾಜು ಪುತ್ರನ ಚಿತ್ರವು ಯಶಸ್ವಿಯಾಗಲೆಂದು ಶುಭಹಾರೈಸಿದರು. ಪ್ರೀತಿ ಯಾವತ್ತು ಸಾಯೋದಿಲ್ಲಾ ಎನ್ನುವ ಅಡಿಬರಹದಲ್ಲಿರುವ ಚಿತ್ರದಲ್ಲಿ ನಾಯಕಿಯಾಗಿ ತೇಜಸ್ವಿನಿ, ಆಮದು ನಟಿ ನಾಯಕಿಯರು. ಕುರುಡನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಾಯಿಕುಮಾರ್ರವರ ೨೦೦ ನೇ ಚಿತ್ರ. ನಾಯಕ ಗೆಳಯನ ಪಾತ್ರಕ್ಕೆ ಚಿಕ್ಕಣ್ಣ ಬಣ್ಣ ಹಚ್ಚಿದ್ದಾರೆ. ವರ್ಷದ ಕಡೆ ದಿನದಂದು ಚಿತ್ರವು ತೆರಕಾಣಲಿದೆ.